ಜಂಟಿ ಪ್ರವಾಸಕ್ಕೆ ಹೋದ್ರಾ ರಶ್ಮಿಕಾ–ವಿಜಯ್?

ಶನಿವಾರ ವಿಜಯ್ ದೇವರಕೊಂಡ ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ಬೀಜ್ ಟಿ-ಶರ್ಟ್ ಮೇಲೆ ಬೂದು ಶರ್ಟ್ ಧರಿಸಿ ಕಾಣಿಸಿಕೊಂಡರು. ಫೋಟೋಗಳಿಗೆ ಪೋಸ್ ನೀಡದೆ ಅವರು ಟರ್ಮಿನಲ್ ಮೂಲಕ ವೇಗವಾಗಿ ಸಾಗಿದರು. ಕೆಲವೇ ಕ್ಷಣಗಳಲ್ಲಿ ರಶ್ಮಿಕಾ ಮಂದಣ್ಣ ಕೂಡ ಪ್ರತ್ಯೇಕವಾಗಿ ಆಗಮಿಸಿದ್ದು, ಭದ್ರತಾ ಸಿಬ್ಬಂದಿಯ ನಡುವೆ ಛಾಯಾಗ್ರಾಹಕರಿಗೆ ಪೋಸ್ ನೀಡದೇ ಸರಳವಾಗಿ ಮುಂದುವರಿದರು. ಕಪ್ಪು ಜೀನ್ಸ್ ಮತ್ತು ಬೂದು ಟಾಪ್‌ನಲ್ಲಿ ಅವರು ಗಮನ ಸೆಳೆದರು.

ವಿಜಯ್ ನಂತರ ರಶ್ಮಿಕಾ ಬಂದಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಅಭಿಮಾನಿಗಳು “ಇವರು ಉದಯಪುರಕ್ಕೆ ಮದುವೆಗೆ ತೆರಳಿದರಾ?” ಎಂದು ಕುತೂಹಲ ವ್ಯಕ್ತಪಡಿಸುತ್ತಿದ್ದಾರೆ. ಗೀತಾ ಗೋವಿಂದಂ (2018) ಮತ್ತು ಡಿಯರ್ ಕಾಮ್ರೇಡ್ (2019) ಸಿನಿಮಾಗಳಿಂದ ಹತ್ತಿರವಾದ ಈ ಜೋಡಿ, ಅಕ್ಟೋಬರ್ 3, 2025ರಂದು ಹೈದರಾಬಾದ್‌ನಲ್ಲಿ ಉಂಗುರ ಬದಲಾಯಿಸಿಕೊಂಡಿದ್ದರು ಎಂಬ ಮಾತುಗಳೂ ಹರಿದಾಡುತ್ತಿವೆ.

ಫೆಬ್ರವರಿ 26ರಂದು ಉದಯಪುರದ ಪಾರಂಪರಿಕ ಅರಮನೆಯಲ್ಲಿ ಖಾಸಗಿ ವಿವಾಹ ನಡೆಯಲಿದೆ ಎಂಬ ವರದಿಗಳು ಇದ್ದು, ಕುಟುಂಬದವರು ಮತ್ತು ಅತ್ಯಾಪ್ತ ಸ್ನೇಹಿತರು ಮಾತ್ರ ಭಾಗಿಯಾಗುವ ಸಾಧ್ಯತೆ ಇದೆ. ಬಳಿಕ ಮಾರ್ಚ್ 4ರಂದು ಹೈದರಾಬಾದ್‌ನ ತಾಜ್ ಕೃಷ್ಣದಲ್ಲಿ ಅದ್ಧೂರಿ ಆರತಕ್ಷತೆ ಆಯೋಜನೆಯಾಗಲಿದೆ ಎಂದು ತಿಳಿದುಬಂದಿದೆ.


ಪ್ರಕಟಿಸಿದವರು ಬಿಗ್ ನ್ಯೂಸ್ 24/7 ಕನ್ನಡ ದಿನಾಂಕ 2026-02-21 16:29:17
No Reviews